ಧಾತ್ರಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಯಲ್ಲಾಪುರ: ತಾಲೂಕಿನ ಕಿರವತ್ತಿ ಭಾಗದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಬೈಲಂದೂರ್ ಗೌಳಿವಾಡ ಶಾಲೆಗಳಿಗೆ ಧಾತ್ರಿ ಫೌಂಡೇಶನ್ ವತಿಯಿಂದ ಪೌಂಡೇಶನ್ ಮುಖ್ಯಸ್ಥ ಶ್ರೀನಿವಾಸ ಭಟ್ಟ ಶನಿವಾರ ಉಚಿತ ನೋಟಬುಕ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ದೊಂಡು ಪಾಟೀಲ್, ವಿಠ್ಠಲ್ ಪಾಂಡ್ರಮೀಸೆ, ಪ್ರಭು ಚಿಚ್ಕಂಡಿ ಗ್ರಾ.ಪಂ ಸದಸ್ಯ ಗಾಂಧಿ ಸೋಮಾಪೂರ್, ಮುಂತಾದವರು ಇದ್ದರು.