ಸ್ನೇಹಿತನಿಂದ ಅಕ್ರಮ ಸಂಬಂಧದ ಬ್ಲ್ಯಾಕ್​ ಮೇಲ್​: 1 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವಕ ಬಲಿ

ಚಾಮರಾಜನಗರ, (ನವೆಂಬರ್ 30): ಒಂದು ತಿಂಗಳ ಹಿಂದೆ ಅಷ್ಟೇ ಮದುವೆಯಾಗಿದ್ದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕು ಕಜ್ಜಿಹುಂಡಿ ಗ್ರಾಮದಲ್ಲಿ ನಡೆದಿದೆ. ಸಂತೋಷ್ (28) ಆತ್ಮಹತ್ಯೆಗೆ ಶರಣಾದ ಯುವಕ. ಪರಸ್ತ್ರೀ ಸಂಬಂಧ ಬಹಿರಂಗಪಡಿಸುತ್ತೇನೆಂದು ಮೃತ ಸ್ನೇಹಿತನೋರ್ವ ಹಣಕ್ಕಾಗಿ ಬ್ಲ್ಕ್ಯಾಕ್ ಮೇಲ್​ ಮಾಡಿದ್ದು, ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸ್ನೇಹಿತ ರವಿ ಎನ್ನುವಾತ ಪರಸ್ತ್ರೀ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆಂದು ಹಣಕ್ಕಾಗಿ ಸಂತೋಷ್​ಗೆ ಬ್ಲ್ಯಾಕ್‌ಮೇಲ್ ಮಾಡಿದ್ದ. ಅಲ್ಲದೇ ಬೆದರಿಸಿ 2 ಲಕ್ಷ ರೂ. ವಸೂಲಿ ಮಾಡಿದ್ದ. ಆದರೂ ಸಮ್ಮನಾಗದ ರವಿ, ಇನ್ನಷ್ಟು ಹಣ ಬೇಕೆಂದು ಮತ್ತೆ ಮತ್ತೆ ಬ್ಲ್ಯಾಕ್​ ಮೇಲ್​ ಮಾಡಿದ್ದಾನೆ. ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.