ಕಾಪುವಿನಲ್ಲಿ ನಾಗರ ಪಂಚಮಿ ಪ್ರಯುಕ್ತ ಜೀವಂತ ನಾಗನಿಗೆ ಜಲಾಭಿಷೇಕ.!

ಉಡುಪಿ: ಕಾಪು ಬಳಿಯ ಮಜೂರು ನಿವಾಸಿ ಗೋವರ್ಧನ್ ಭಟ್‌ರವರು ಈ ಬಾರಿಯೂ ಮಂಗಳವಾರ ನಡೆದ ನಾಗರ ಪಂಚಮಿಯಂದು ತಮ್ಮ ಮನೆಯಲ್ಲಿ ಜೀವಂತ ನಾಗರ ಹಾವಿಗೆ ಜಲಾಭಿಷೇಕ ಮಾಡಿ, ದೀಪ ಬೆಳಗಿ ನಾಗರ ಪಂಚಮಿ ಹಬ್ಬ ವಿಶಿಷ್ಠವಾಗಿ ಆಚರಿಸಿದರು.

ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆದ ಗೋವರ್ಧನ ಭಟ್‌ರವರು ಕ್ಯಾಟರಿಂಗ್ ಕೂಡಾ ನಡೆಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ರಸ್ತೆಯಲ್ಲಿ ಅಪಘಾತಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ನಾಗರ ಹಾವುಗಳನ್ನು ತಂದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ಅದು ಸಂಪೂರ್ಣ ಗುಣ ಮುಖವಾದಾಗ ಮತ್ತೆ ಅದನ್ನು ಕಾಡಿಗೆ ಬಿಡುವುದೂ ಅವರ ನೆಚ್ಚಿನ ಕಾಯಕ.

ಎಲ್ಲೇ ಗಾಯಗೊಂಡಿರುವ ಹಾವು ಬಗ್ಗೆ ಯಾರೇ ದೂರವಾಣಿ ಕರೆ ಮಾಡಿದರೂ, ಯಾವುದೇ ಫಲಾಪೇಕ್ಷೆ ಇಲ್ಲದೆ ಅಲ್ಲಿಗೆ ಧಾವಿಸುವ ಗೋರ್ವಧನ ಭಟ್ ಅವರಿಗೆ ನಾಗರ ಹಾವಿನ ಡಾಕ್ಟರ್ ಎಂದು ಕರೆಯುತ್ತಾರೆ.