ಗಂಡಸರಿಗೆ ಉಚಿತ ಪ್ರಯಾಣ ಕೊಡದಿದ್ರೆ ನಮಗೆ ಅವಮಾನ ಎಂದ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜು

ಬೆಂಗಳೂರು: ಉಚಿತ ಪ್ರಯಾಣ ಅಂತಾ ಹೆಂಗಸರು ಯಾರ ಮಾತನ್ನು ಕೇಳುತ್ತಿಲ್ಲ. ಹಾಗಂತ ಮಹಿಳೆಯರ ಉಚಿತ ಪ್ರಯಾಣ ನಾನು ವಿರೋಧ ಮಾಡುತ್ತಿಲ್ಲ. ಆದರೆ ಸರ್ಕಾರ ಗಂಡಸರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎಂದು ಸರ್ಕಾರಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜು ಆಗ್ರಹ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಂಡಸರಿಗೆ ಉಚಿತ ಪ್ರಯಾಣ ಕೊಡದಿದ್ದರೆ ನಮಗೆ ಅವಮಾನ ಆಗುತ್ತದೆ. ಮುಂದಿನ ವಾರ ಬಿಎಂಟಿಸಿ ಬಸ್​ ಹತ್ತಿ ಎಲ್ಲರ ಪರವಾಗಿ ಕೇಳುತ್ತೇನೆ ಎಂದು ಹೇಳಿದರು.

ಮನೆ ಎರೆಡು ಭಾಗ ಮಾಡಿದ್ದೀರಿ ಎಲ್ಲರಿಗೂ ಉಚಿತ ಕೊಡಿ, ಇದೊಂದು ಪ್ರಳಯ ಆಗಲಿ. ಗಂಡಸರ ಉಚಿತ ಪ್ರಯಾಣ ಬಗ್ಗೆಯೂ ಬಜೆಟ್​ನಲ್ಲಿ ಘೋಷಿಸಿ. ಗಂಡಸರು ವೋಟ್ ಹಾಕಿಲ್ವಾ, ಅವರಿಗೆ ಉಚಿತ ಪ್ರಯಾಣ ಕೊಡಿ ಎಂದು ಒತ್ತಾಯಿಸಿದ್ದಾರೆ.