ಪಿಡಿಒ, ಸದಸ್ಯನಿಂದ ಕಿರುಕುಳ ಆರೋಪ; ಮನನೊಂದು ಗ್ರಾಮ ಪಂಚಾಯತಿ ಕಚೇರಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯತಿ ಪಿಡಿಒ ಶಿವಾನಂದ್ ಮತ್ತುವ ಮತ್ತು ಸದಸ್ಯ ಶ್ರೀನಿವಾಸ್ ಎಂಬುವವರಿಂದ ಕಿರುಕುಳ ಆರೋಪದ ಹಿನ್ನಲೆ ಮನನೊಂದು ತಾಯಿ ಮತ್ತು ಮಗ ಗ್ರಾಮ ಪಂಚಾಯತಿ ಕಛೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹೌದು ರಸ್ತೆಯಲ್ಲಿ ಗುಂಡಿ ಅಗೆದಿದ್ದಕ್ಕೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ತಾಯಿ ಮತ್ತು ಮಗ ಸೇರಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳಿಯರು ಬಂದು, ತಾಯಿ ಮಗನನ್ನ ರಕ್ಷಿಸಿದ್ದಾರೆ. ರಾಮೇಶ್ವರ ಗ್ರಾಮದ ತಾಯಿ ನಾಗಮಣಿ ಮತ್ತು ಮಗ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದವರು.