ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ; ಕುಂಟ ಎಂದು ರೇಗಿಸಿದ್ದಕ್ಕೆ ಬಿತ್ತು ಹೆಣ

ಬೆಂಗಳೂರು: ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿದೆ(Bengaluru Crime). ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯಲ್ಲಿ ವಿಜಿ(45) ಎಂಬ ವ್ಯಕ್ತಿಯ ಕೊಲೆ ಮಾಡಲಾಗಿದೆ(Murder). ಕೊಲೆ ಆರೋಪಿಗಳಾದ ಗಿರೀಶ್, ಶಂಕರ್​ನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಅನ್ನಪೂರ್ಣೇಶ್ವರಿನಗರದ ಬಾರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಿ, ಗಿರೀಶ್​ನನ್ನು ಪದೇಪದೆ ರೇಗಿಸುತ್ತಿದ್ದ. ಅಂಗವಿಕಲನಾಗಿದ್ದ ಗಿರೀಶ್​ಗೆ ಇದು ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ವಿಜಿ ತನಗೆ ಕುಂಟ ಎಂದು ರೇಗಿಸುತ್ತಿದ್ದದ್ದು ಕೋಪ ತರಿಸುತ್ತಿತ್ತು. ಹೀಗಾಗಿ ನಿನ್ನೆ(ಜೂನ್ 21) ರಾತ್ರಿ ಬಾರ್ ಕ್ಲೋಸ್​ ಆದ ನಂತರ ಇವರ ನಡುವೆ ಗಲಾಟೆ ಶುರುವಾಗಿತ್ತು. ಈ ಗಲಾಟೆ ಬೇರೆ ರೀತಿಯ ತಿರುವು ಪಡೆದುಕೊಂಡಿದ್ದು ವಿಜಿಯನ್ನು ಗಿರೀಶ್ ಹಾಗೂ ಶಂಕರ್ ಸೇರಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.