ಬೆಂಗಳೂರು: ಓಲಾ, ಊಬರ್ ಚಾಲಕರೇ ಈತನ ಟಾರ್ಗೆಟ್, ಖರ್ತನಾಕ್‌ ಖದೀಮನ ಬಂಧನ

ಬೆಂಗಳೂರು(ಜೂ.17):  ಪ್ರಯಾಣಿಕನ ಸೋಗಿನಲ್ಲಿ ಬುಕ್ ಮಾಡಿ ಚಾಕು ತೋರಿಸಿ ಸುಲಿಗೆ ಮಾಡಲು ಯತ್ನಿಸಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಾಣಸವಾಡಿ ಪೊಲೀಸರು ಆರೋಪಿ ವಿನಯ್ ಎಂಬಾತನನ್ನ ಬಂಧಿಸಿದ್ದಾರೆ.  

ಪೊಲೀಸರಿಗೆ ದೂರು ಕೊಡಲ್ಲ ಅಂತಾ ಓಲಾ ಚಾಲಕನನ್ನ ಟಾರ್ಗೆಟ್ ಮಾಡಿ ಆರೋಪಿ ವಿನಯ್ ಸುಲಿಗೆ ಮಾಡಲುತ್ತಿದ್ದನಂತೆ. ಹೆಚ್ಎಎಲ್, ಬಾಣಸವಾಡಿ, ಹೈ ಗ್ರೌಂಡ್ಸ್, ಎಂ.ಜಿ ರೋಡ್ ಈ ಭಾಗಗಳಿಂದ ಕ್ಯಾಬ್ ಬುಕ್ ಮಾಡಿ ಸುಲಿಗೆ ಮಾಡಿದ್ದ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುಲಿಗೆ ಮಾಡುತ್ತಿದ್ದ ಆರೋಪಿ ವಿನಯ್.