ಮುಸ್ಲಿಂ ಹುಡುಗಿ ಪ್ರೀತಿಸಿದ್ದಕ್ಕೆ ದುರಂತ ಅಂತ್ಯ ಕಂಡ ಯುವಕ, ಕೊಂದು 8 ತುಂಡುಗಳಾಗಿ ಕತ್ತರಿಸಿದ್ರು

ಹಿಮಾಚಲಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಪ್ರೇಮಕಥೆ ದುರಂತ ಅಂತ್ಯ ಕಂಡಿದೆ. ಹುಡುಗಿಯ ಸಹೋದರನೇ ಪ್ರಿಯಕರನ್ನು ಹತ್ಯೆ ಮಾಡಿ 8 ತುಂಡುಗಳಾಗಿ ಕತ್ತರಿಸಿ, ಗೋಣಿಚೀಲದಲ್ಲಿ ತುಂಬಿ ಶವವನ್ನು ಚರಂಡಿ ಬಳಿ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣದಲ್ಲಿ ಇಬ್ಬರು ಹುಡುಗಿಯರು ಹಾಗೂ ಒಬ್ಬ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಬೀರ್, ಮುಸಾಫಿರ್ ಹುಸೇನ್ ಮತ್ತೊಬ್ಬಳು ಆತನ ಪತ್ನಿ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆದರೆ, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಚಂಬಾದ ಎಸ್ಪಿ ಅಭಿಷೇಕ್ ಯಾದವ್ ಹತ್ಯೆಯನ್ನು ಖಚಿತಪಡಿಸಿದ್ದಾರೆ. ಜೂನ್ 9ರಂದು ಯುವಕನ ಶವ ಪತ್ತೆಯಾಗಿತ್ತು. ಯುವಕ ಮನೋಹರ್ ಜೂನ್ 6 ರಿಂದ ನಾಪತ್ತೆಯಾಗಿದ್ದ. ಇದು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ವಿಚಾರ ಎಂದು ಹೇಳಲಾಗುತ್ತಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಆದರೆ ಯುವತಿಯ ಕುಟುಂಬದವರಿಗೆ ಇದು ಇಷ್ಟವಿರಲಿಲ್ಲ. ಯುವಕನನ್ನು ಕೊಂದ ನಂತರ ಬಾಲಕಿಯ ಸಹೋದರ ಆತನ ದೇಹವನ್ನು 8 ತುಂಡುಗಳಾಗಿ ಕತ್ತರಿಸಿ  ಈ ತುಂಡುಗಳನ್ನು ಗೋಣಿಚೀಲದಲ್ಲಿ ತುಂಬಿದ್ದ ಎಂದು ಹೇಳಲಾಗಿದೆ.

ಬಳಿಕ ಆರೋಪಿಗಳು ಗೋಣಿಚೀಲವನ್ನು ಚರಂಡಿಯ ಕಲ್ಲುಗಳ ಕೆಳಗೆ ಹೂತಿಟ್ಟಿದ್ದ, ಜೂನ್ 9 ರಂದು ಕೆಲವರು ಈ ಮಾರ್ಗವಾಗಿ ಹೋಗುತ್ತಿದ್ದಾಗ ದುರ್ವಾಸನೆ ಬೀರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆಯಲ್ಲಿ ಗೋಣಿಚೀಲದಿಂದ ಮನೋಹರ್‌ನ ದೇಹದ ಭಾಗಗಳು ಪತ್ತೆಯಾಗಿವೆ. ಮನೋಹರ್ ಅವರ ದೇಹವನ್ನು ಕೊಡಲಿಯಿಂದ ಕತ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅವರ ದೇಹದ ಕೆಲವು ಭಾಗಗಳೂ ಕಾಣೆಯಾಗಿವೆ.

ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಭಂಡಾಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ಅವರ ಸಮುದಾಯದವರು ಬಹಿಷ್ಕರಿಸಿದ್ದಾರೆ. ಘಟನೆಯ ನಂತರ, ಹಿಂದೂ ಜಾಗರಣ್ ಮಂಚ್ ಸದಸ್ಯರು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ದಾರೆ. ತನ್ನ ಮಗನನ್ನು ಕೊಂದ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಮನೋಹರ್ ತಾಯಿ ಒತ್ತಾಯಿಸಿದ್ದಾರೆ.