ಮುಂಬೈ, ದೆಹಲಿಯಷ್ಟೇ ಅಲ್ಲ ಬೆಂಗಳೂರಲ್ಲೂ ಹೆಚ್ಚಾಗ್ತಿದೆ ಲಿವಿಂಗ್ ರಿಲೇಷನ್ ಕೊಲೆ ಕೇಸ್

ಬೆಂಗಳೂರು: ಮುಂಬೈ , ದೆಹಲಿಯಂತಹ ಮಹಾನಗರಗಳಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲೂ ಈಗ ಲಿವಿಂಗ್ ರಿಲೇಷನ್‌ಶಿಪ್ ಕೊಲೆ ಕೇಸ್‌ಗಳು ಹೆಚ್ಚಾಗಿ ದಾಖಲಾಗ್ತಿವೆ.

ಲಿವಿಂಗ್ ರಿಲೇಷನ್‌ಶಿಪ್‌ನಲ್ಲೇ ಇರ್ತಾರೆ, ಜಗಳ ಮಾಡಿಕೊಂಡು ಕೊಲೆಯಾಗ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಕಳೆದ 8 ತಿಂಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಎಲ್ಲಾ ಕೇಸ್‌ನಲ್ಲೂ ಮಾರಕಾಸ್ತ್ರ ಬಳಕೆಯಾಗಿದ್ದು, ಭೀಕರವಾಗಿ ಕೊಲೆಯಾಗಿರುವುದು ಕಂಡುಬಂದಿದೆ.

ಕೇಸ್ ನಂ.1:

ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಯುವತಿ ಕೌಸರ್ ಹಾಗೂ ಆರೋಪಿ ನದೀಪ್ ಪಾಷ 4 ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಈ ವೇಳೆ ಹುಟ್ಟುಹಬ್ಬಕ್ಕೆ ಬೆಳ್ಳಿ ಚೈನ್ ತಂದುಕೊಡದಿದ್ದಕ್ಕೆ ಕೌಸರ್ ಜಗಳ ತೆಗೆದು, ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ನದೀಪ್ ಪಾಷಾ ಯುವತಿ ಕೌಸರ್‌ಳನ್ನ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ.

ಕೇಸ್ ನಂ.2:

ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದಕ್ಕೆ ಯುವತಿಯ ಪ್ರಿಯತಮ ಆತನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಆರೋಪಿ ವಿಕ್ಟರ್ ತನ್ನ ಪ್ರಿಯತಮೆಯೊಂದಿಗೆ ಕೆಲ ವರ್ಷಗಳಿಂದ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ. ಆದ್ರೆ ಯುವತಿ ತನ್ನ ಸ್ನೇಹಿತ ಸುಲೇಮಾನ್ ಜೊತೆ ಸಲುಗೆಯಿಂದ ಇದ್ದಿದ್ದನ್ನು ನೋಡಿ ವಿಕ್ಟರ್, ಸುಲೇಮಾನ್‌ನನ್ನ ಭೀಕರವಾಗಿ ಕೊಲೆ ಮಾಡಿದ್ದ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಕೇಸ್ ನಂ.3:

ಮಾಜಿ ಪ್ರಿಯತಮೆಗೆ ಪದೇ ಪದೇ ಕರೆ ಮಾಡುತ್ತಿದ್ದಕ್ಕೆ ಆರೋಪಿ ಶ್ರೀಕಾಂತ್‌ನನ್ನು ಕೊಲೆ ಮಾಡಿದ್ದ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮಹಿಳೆಯೊಬ್ಬಳು ಮೊದಲು ಕೊಲೆಯಾದ ಶ್ರೀಕಾಂತ್ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ನಂತರ ಅವನೊಂದಿಗೆ ಜಗಳವಾಡಿಕೊಂಡು ಬೇರ್ಪಟ್ಟು, ಅರುಣ್ ಕುಮಾರ್ ಜೊತೆಗಿದ್ದಳು. ಆದ್ರೆ ಶ್ರೀಕಾಂತ್ ಪದೇ ಪದೇ ಮಹಿಳೆಗೆ ಕರೆ ಮಾಡ್ತಿದ್ದರಿಂದ ಅರುಣ್ ಶ್ರೀಕಾಂತ್‌ನನ್ನ ಕೊಲೆ ಮಾಡಿಸಿದ್ದ. ಸಿಸಿಬಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು.

ಕೇಸ್ ನಂ.4:

ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಪ್ರಿಯತಮೆಯನ್ನ ಕೊಲೆ ಮಾಡಿದ್ದ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಿಯತಮೆ ಸುನಿತಾ ಕೆಲ ವರ್ಷಗಳಿಂದ ಆರೋಪಿ ಪ್ರಿಯತಮ ಪ್ರಶಾಂತ್ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ಸುನಿತಾ ಲಿವಿಂಗ್ ಸಾಕು ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಶ್ರೀಕಾಂತ್ ಆಕೆಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದ.

ಕೇಸ್ ನಂ.5:

ತನ್ನ ಪ್ರಿಯತಮೆಯ ಮೇಲೆ ಅನುಮಾನಗೊಂಡು ರಾಡ್‌ನಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ್ದ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ನೇಪಾಳ ಮೂಲದ ಕೃಷ್ಣಕುಮಾರಿ ಹಾಗೂ ಆರೋಪಿ ಸಂತೋಷ್ ಒಟ್ಟಿಗೇ ವಾಸಿಸುತ್ತಿದ್ದರು. ಆದ್ರೆ ಕೃಷ್ಣಕುಮಾರಿ ಮೇಲೆ ಅನುಮಾನಗೊಂಡಿದ್ದ ಸಂತೋಷ್ ಇದೇ ವಿಚಾರಕ್ಕೆ ಜಗಳ ತೆಗೆಯುತ್ತಿದ್ದ. ಕೊನೆಗೆ ಒಮ್ಮೆ ಜಗಳ ವಿಕೋಪಕ್ಕೆ ತಿರುಗಿ ಸಂತೋಷ್ ರಾಡ್‌ನಿಂದ ಬಲವಾಗಿ ಹೊಡೆದು ಕೃಷ್ಣಕುಮಾರಿಯನ್ನ ಕೊಲೆ ಮಾಡಿದ್ದ.

ಕೇಸ್ ನಂ.6:

ಅರ್ಪಿತ್ ಎಂಬ ಯುವಕ ತನ್ನೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದ ಆಕಾಂಕ್ಷ ಯುವತಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಘಟನೆ ಜೀವನ್ ಭೀಮನಗರದಲ್ಲಿ ನಡೆದಿತ್ತು.

ಕೇಸ್ ನಂ.7:

ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಅಯ್ಯಪ್ಪ ಎಂಬ ವ್ಯಕ್ತಿ ತನ್ನ ಪತ್ನಿಯ (ನಾಗರತ್ನ) ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿತ್ತು.