ಗ್ರಾ.ಪಂ ಆಶ್ರಯದಲ್ಲಿ ರಾಧಾ-ಕೃಷ್ಣ ವೇಷ ಸ್ಪರ್ಧೆ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಗ್ರಾ.ಪಂ ಸಭಾಭವನದಲ್ಲಿ ಪುಟಾಣಿಗಳಿಗೆ ಗ್ರಾ.ಪಂ ಆಶ್ರಯದಲ್ಲಿ ರಾಧಾ-ಕೃಷ್ಣ ವೇಷ ಸ್ಪರ್ಧೆ ಸೋಮವಾರ ನಡೆಯಿತು.

ರಾಧಾ ವೇಷ ಸ್ಪರ್ಧೆಯಲ್ಲಿ ಖುಷಿ ಮಂಜುನಾಥ ಹೆಗಡೆ ಸೂಳಗಾರ ಪ್ರಥಮ, ಅಪರ್ಣಾ ಭಟ್ಟ, ಹಿತ್ಲಕಾರಗದ್ದೆ ದ್ವಿತೀಯ, ಮಾನ್ವಿ ಭಟ್ಟ ಕುಂಭತ್ತಿ ತೃತೀಯ ಸ್ಥಾನ ಪಡೆದರು. ಕೃಷ್ಣ ವೇಷ ಸ್ಪರ್ಧೆಯಲ್ಲಿ ಧೀಮಹಿ ಚಿನ್ಮಯ ಬೆಳ್ಳಿ ಪ್ರಥಮ, ಅಪರ್ಣಾ ಆರ್ ಭಟ್ಟ ದ್ವಿತೀಯ, ನಿಖಿತಾ ಹೆಗಡೆ ಸೂಳಗಾರ ತೃತೀಯ ಸ್ಥಾನ ಪಡೆದರು. ರಾಧಾ-ಕೃಷ್ಣ ವೇಷದಲ್ಲಿ ರಾಜಶ್ರೀ ಮತ್ತು ಅಪರ್ಣಾ ಹಿತ್ಲಕಾರಗದ್ದೆ ಹಾಗೂ ರೋಷನಿ ಮತ್ತು ಋತ್ವಿಕಾ ನಂದೊಳ್ಳಿ ಪ್ರಥಮ,
ಅನ್ವಿತ್ ಮತ್ತು ಯಶಸ್ವಿನಿ ಮಾಗೋಡ ಕಾಲೋನಿ ದ್ವಿತೀಯ, ಮನ್ವಿತಾ ಮತ್ತು ಮಾನ್ವಿ ನಂದೊಳ್ಳಿ ತೃತೀಯ ಬಹುಮಾನ ಪಡೆದರು.

ಪತ್ರಕರ್ತ ಶ್ರೀಧರ ಅಣಲಗಾರ, ಶಿಕ್ಷಕರಾದ ಅರ್ಚನಾ, ಕರಣಿಕಾ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಗ್ರಾ.ಪಂ ಸದಸ್ಯ ಟಿ.ಆರ್.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಇಒ ಜಗದೀಶ ಕಮ್ಮಾರ ವಿಜೇತರಿಗೆ ಬಹುಮಾನ ವಿತರಿಸಿದರು.