ಆಯ್ಕೆಯ ಅವಕಾಶ: ಟಿಡಿಎಸ್ ಮತ್ತು ಟಿಸಿಎಸ್ ಪಾವತಿ ಮಾಡಿದವರಿಗೆ ತೆರಿಗೆ ಇಲಾಖೆ ರಿಲೀಫ್

ಟಿಡಿಎಸ್ ಕಡಿತ ಮತ್ತು ಟಿಸಿಎಸ್ ಸಂಗ್ರಹ ಕಡಿಮೆಯಾಗಿದ್ದಕ್ಕಾಗಿ ನೋಟಿಸ್ ಪಡೆದ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆ ಪರಿಹಾರ ನೀಡಿದೆ. ಪ್ಯಾನ್-ಆಧಾರ್ ಲಿಂಕ್ ಮಾಡದ ಕಾರಣ ತೆರಿಗೆ ಪಾವತಿದಾರರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ. ಈ ತೆರಿಗೆ ಪಾವತಿದಾರರು ಆದಾಯ ತೆರಿಗೆ ಇಲಾಖೆ ನೀಡಿದ ಗಡುವಿನೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡಿದರೆ ಅವರ ನೋಟಿಸ್‌ಗಳನ್ನು ರದ್ದುಗೊಳಿಸಲಾಗುತ್ತದೆ.

ಇದಲ್ಲದೆ, ಆಗಸ್ಟ್ 1, 2025 ರ ನಂತರ ಟಿಡಿಎಸ್ ಅಥವಾ ಟಿಸಿಎಸ್ ಪಾವತಿಸುವ ಅಥವಾ ಠೇವಣಿ ಇಡುವವರಿಗೆ ಸಹ ಪರಿಹಾರ ನೀಡಲಾಗಿದೆ. ನಿಷ್ಕ್ರಿಯ ಪ್ಯಾನ್ ಕಾರ್ಡ್ ಕಾರಣ ಅವರಿಗೆ ಈ ನೋಟೀಸ್ ಬಂದಿದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅನ್ನು ಇನಾಪರೇಟಿವ್ ಎಂದು ವಿಭಾಗಿಸಲಾಗುತ್ತದೆ. ನಿಗದಿತ ಸಮಯದ ಮಿತಿಯೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದರೆ, ಎಲ್ಲಾ ನೋಟೀಸ್​ಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಆದಾಯ ತೆರಿಗೆ ಇಲಾಖೆ ಹೇಳಿದ್ದೇನು?

ಆದಾಯ ತೆರಿಗೆ ಇಲಾಖೆಯು ಜುಲೈ 21, 2025 ರಂದು ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206AA/206C ಅಡಿಯಲ್ಲಿ ಎರಡು ಷರತ್ತುಗಳನ್ನು ಪೂರೈಸುವ ಡಿಡಕ್ಟರ್ (ಟಿಡಿಎಸ್) ಅಥವಾ ಕಲೆಕ್ಟರ್​ಗೆ (ಟಿಸಿಎಸ್) ನೀಡಲಾದ ನೋಟೀಸ್ ಅನ್ನು ರದ್ದುಗೊಳಿಸಲಾಗುವುದು ಎಂದಿದೆ.

  1. ಏಪ್ರಿಲ್ 1, 2024 ರಿಂದ ಜುಲೈ 31, 2025 ರವರೆಗೆ ಮೊತ್ತವನ್ನು ಪಾವತಿಸಿದರೆ ಅಥವಾ ಠೇವಣಿ ಇಟ್ಟರೆ ಮತ್ತು ಸೆಪ್ಟೆಂಬರ್ 30, 2025 ರಂದು ಅಥವಾ ಅದಕ್ಕೂ ಮೊದಲು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ, ಅವರ ನೋಟಿಸ್ ರದ್ದಾಗುತ್ತದೆ.
  2. ಆಗಸ್ಟ್ 1, 2025 ರಂದು ಅಥವಾ ನಂತರ ಮೊತ್ತವನ್ನು ಪಾವತಿಸಿದರೆ ಅಥವಾ ಠೇವಣಿ ಇಟ್ಟರೆ, ಮತ್ತು ಮೊತ್ತವನ್ನು ಪಾವತಿಸಿದ ಅಥವಾ ಠೇವಣಿ ಇಟ್ಟ ತಿಂಗಳ ಅಂತ್ಯದಿಂದ ಎರಡು ತಿಂಗಳೊಳಗೆ ಆಧಾರ್‌ನೊಂದಿಗೆ ಲಿಂಕ್ ಮಾಡುವ ಮೂಲಕ ಪ್ಯಾನ್ ಅನ್ನು ಸಕ್ರಿಯಗೊಳಿಸಿದರೆ, ಅದಕ್ಕೂ ವಿನಾಯಿತಿ ನೀಡಲಾಗುತ್ತದೆ.
ಟೈಮ್ ಫ್ರೇಮ್ಡೆಡ್​ಲೈನ್
ಏಪ್ರಿಲ್ 1, 2024 ರಿಂದ ಜುಲೈ 31, 2025 ರವರೆಗೆ ಪಾವತಿಸಿದ ಅಥವಾ ಠೇವಣಿ ಮಾಡಿದ TDS/TCSಸೆಪ್ಟೆಂಬರ್ 30, 2025 ರಂದು ಅಥವಾ ಅದಕ್ಕೂ ಮೊದಲು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು.
ಆಗಸ್ಟ್ 1, 2025 ರಂದು ಅಥವಾ ನಂತರ ಪಾವತಿಸಿದ ಅಥವಾ ಠೇವಣಿ ಮಾಡಿದ TDS/TCSಪ್ಯಾನ್ ಅನ್ನು ಪಾವತಿಸಿದ ಅಥವಾ ಠೇವಣಿ ಮಾಡಿದ ತಿಂಗಳ ಅಂತ್ಯದ ವೇಳೆಗೆ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಅಥವಾ ಕ್ರೆಡಿಟ್ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

 ಅದರ ಪರಿಣಾಮ ಏನಾಗುತ್ತದೆ?

ನಿಷ್ಕ್ರಿಯ ಪ್ಯಾನ್ ಪ್ರಕರಣಗಳಲ್ಲಿ ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ಟಿಡಿಎಸ್ ಕಡಿತಗೊಳಿಸಿದ ಅಥವಾ ಟಿಸಿಎಸ್ ಸಂಗ್ರಹಿಸಿದ ತೆರಿಗೆದಾರರು, ಗಡುವು ಮುಗಿಯುವ ಮೊದಲು ಪ್ಯಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಿದರೆ, ಟ್ಯಾಕ್ಸ್ ಡಿಮ್ಯಾಂಡ್​ನಿಂದ ಪರಿಹಾರ ಪಡೆಯುತ್ತಾರೆ ಎಂದು ಇಲಾಖೆಯ ಸುತ್ತೋಲೆ ಸ್ಪಷ್ಟವಾಗಿ ಹೇಳುತ್ತದೆ

ಪರಿಹಾರ ನೀಡುವುದರ ಹಿಂದಿನ ಕಾರಣವೇನು?

ವಹಿವಾಟಿನ ಸಮಯದಲ್ಲಿ, ಮೊತ್ತವನ್ನು ಸ್ವೀಕರಿಸುವ ಅಥವಾ ಪಾವತಿ ಮಾಡುವ ವ್ಯಕ್ತಿಯ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿಲ್ಲ ಎಂದು ಅನೇಕ ತೆರಿಗೆ ಪಾವತಿದಾರರಿಂದ ದೂರುಗಳು ಬರುತ್ತಿದ್ದರಿಂದ ಆದಾಯ ತೆರಿಗೆ ಇಲಾಖೆಯು ಈ ಪರಿಹಾರವನ್ನು ನೀಡಿದೆ. ಈ ಕಾರಣದಿಂದಾಗಿ, ಅವರಿಗೆ ಕಡಿಮೆ ಕಡಿತ/ಸಂಗ್ರಹಣೆಯ ನೋಟೀಸ್​ಗಳು ಬರಲು ಪ್ರಾರಂಭಿಸಿದವು.