ಮೊದಲ‌ ಬಾರಿ ಜೂನ್​ನಲ್ಲೇ 124 ಅಡಿ ತಲುಪಿದ ಕೆಆರ್‌ಎಸ್‌ ಮಟ್ಟ: -ಸೋಮವಾರ ಸಿಎಂ ಬಾಗಿನ

ಬೆಂಗಳೂರು: ಮೈದುಂಬಿದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬಾಗಿನ ಅರ್ಪಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗುವರು.

1941ರ ಬಳಿಕ ಇದೇ ಮೊದಲ ಬಾರಿಗೆ ಜೂನ್​ ತಿಂಗಳಲ್ಲೇ ಜಲಾಶಯದಲ್ಲಿ ನೀರಿನ ಮಟ್ಟ 124 ಅಡಿ ತಲುಪಿದೆ.‌ ಸಾಮಾನ್ಯವಾಗಿ ಜುಲೈ ತಿಂಗಳಾಂತ್ಯ ಅಥವಾ ಆಗಸ್ಟ್‌ನಲ್ಲಿ ಕೆಆರ್​ಎಸ್​ಗೆ ಬಾಗಿನ ಅರ್ಪಿಸಲಾಗುತ್ತದೆ. ಆದರೆ, ಈ ಬಾರಿ ಉತ್ತಮ ಮುಂಗಾರು ಮಳೆಯಾಗುತ್ತಿದ್ದು, ಜಲಾಶಯ ಜೂನ್‌ನಲ್ಲೇ​ಭರ್ತಿಯಾಗಿದೆ.

1941 ಜೂನ್ 21ರಲ್ಲಿ 121.45 ಅಡಿ ನೀರು ತುಂಬಿತ್ತು. ಇದೀಗ ನೀರಿನ ಮಟ್ಟ 124 ಅಡಿ ತಲುಪಿದೆ.

ಕೆಆರ್‌ಎಸ್ ನೀರಿನ ಮಟ್ಟದ ಇತಿಹಾಸ:

ವರ್ಷ, ತಿಂಗಳುಮಟ್ಟ(ಅಡಿಗಳಲ್ಲಿ)
1941, ಜೂನ್121.45
1954, ಜೂನ್103.83
1957, ಜೂನ್103.99
1973, ಜೂನ್110.25
1961,1962, 1963, ಜೂನ್100
1976, ಜೂನ್104.56
1978, ಜೂನ್107.57
1980, ಜೂನ್106.80
1984, ಜೂನ್109.16
2004, ಜೂನ್102.10
2008, ಜೂನ್102.48
2018, ಜೂನ್103.85
2022, ಜೂನ್106.30
2025, ಜೂನ್118.60

ಉಳಿದಂತೆ, ಜಲಾಶಯದ ನೀರಿನ ಮಟ್ಟ ಜೂನ್‌ನಲ್ಲಿ ಸರಾಸರಿ 70-80 ಅಡಿ ಆಸುಪಾಸಿನಲ್ಲಿತ್ತು.