ಗಾಂಜಾ ಸೇವನೆ ದೃಢ: ಒರ್ವನ ಬಂಧನ

ಶಿರಸಿ : ಗಾಂಜಾ ಮಾಧಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಠಾಣೆ ಪೊಲೀಸರು
ಶಿರಸಿ ನಗರದ ಹರೀಶ್ ಮಂಜುನಾಥ ನಾಯ್ಕ ಬಂಧಿಸಿದ್ದಾರೆ.

ಬಂಧಿತ ಆರೋಪಿಯುವ ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿದ ಸ್ಥಿತಿಯಲ್ಲಿ ನಿಲೆಕಣಿ ಮೀನು ಮಾರುಕಟ್ಟೆ ಪಕ್ಕದ ಲಿಂಗದಕೋಣ ರಸ್ತೆ ಹತ್ತಿರ ಸಿಕ್ಕಿ ಬಿದ್ದಿದ್ದು, ಆತನನ್ನು ವಶಕ್ಕೆ ಪಡೆದು ನಗರದ ಪಂಡೀತ ಸರಕಾರಿ ಆಸ್ಪತ್ರೆಯಲ್ಲಿ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಾಗಿತ್ತು.
ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ ಕೆ.ಎಲ್‌, ವೃತ್ತ ನಿರೀಕ್ಷಕರಾದ ಶ್ರೀಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ ಬಿ ಹಾಗೂ ಸಿಬ್ಬಂದಿಗಳಾದ ನಾರಾಯಣ ರಾಥೋಡ ಎಎಸ್ಐ, ಹನುಮಂತ ಕಬಾಡಿ,ಸದ್ದಾಂ ಹುಸೇನ್‌, ಮಲ್ಲಿಕಾರ್ಜುನ ಕುದರಿ, ಚನ್ನಬಸಪ್ಪ ‌ಕ್ಯಾರಕಟ್ಟಿ, ಶಿವಲಿಂಗ ತುಪ್ಪದ ಪ್ರವೀಣ್ ಎನ್,ರಾಜಶೇಖರ ಅಂಗಡಿ, ಪಾಲ್ಗೊಂಡಿದ್ದರು.