ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ: ಕಾರು ಸಮೇತ ಪರಾರಿಯಾಗಿದ್ದ ಆಸಾಮಿ ಅಂದರ್

ದೇವನಹಳ್ಳಿ, ಸೆಪ್ಟೆಂಬರ್​ 15: ಕ್ಯಾಬ್​ ಚಾಲಕನ ಬಳಿಯೇ ದರೋಡೆ ಮಾಡಿ ಜೊತೆಗೆ ಕ್ಯಾಬ್ ಸಮೇತ ಎಸ್ಕೇಪ್​ ಆಗಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ  ಬೆಂಗಳೂರು ಮೂಲದ ಖಾನ್​ ಎಂಬಾತನನ್ನು ಬಂಧಿಸಿದ್ದಾರೆ. ದರೋಡೆ ಬಗ್ಗೆ ಚಾಲಕ ರವಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವಿಲ್ಸನ್​ ಗಾರ್ಡ‌ನ್​ನಿಂದ ಆ್ಯಪ್ ಮೂಲಕ ಕ್ಯಾಬ್ ಬುಕ್‌ ಮಾಡಿದ್ದ ಆರೋಪಿ ಟೆಕ್ಕಿಯ ಸೋಗಿನಲ್ಲಿ ಕ್ಯಾಬ್​ ಹತ್ತಿದ್ದಾನೆ. ಬಳಿಕ ಚಾಲಕ ರವಿಕುಮಾರ್​ ಸಿಟಿ ಏರ್ಪೋಟ್ ಮತ್ತು ನಂದಿಬೆಟ್ಟ ಸುತ್ತಾಡಿ ಸಂಜೆ ಡಾಬಾಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ಡಾಬಾದಲ್ಲಿ ಚಾಕು ತೋರಿಸಿ ಬೆದರಿಸಿ ಹಣ, ಮೊಬೈಲ್ ಮತ್ತು ಅಕೌಂಟ್​ನಲ್ಲಿದ್ದ ಹಣವನ್ನು ದರೋಡೆ ಮಾಡಿದ್ದು, ಬಳಿಕ ಅದೇ ಕ್ಯಾಬ್​ನಲ್ಲಿ ಪರಾರಿ ಆಗಿದ್ದ. ಚಾಲಕ ದೂರು ಆಧರಿಸಿ ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.