ಸತೀಶ ಕಟ್ಟಿಗೆ ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು: ಜಯರಾಮ ಬೊಳ್ಳಾಜೆ

ಯಲ್ಲಾಪುರ: ಬದುಕನ್ನು ಸಂಪೂರ್ಣವಾಗಿ ಸಮಾಜಕ್ಕೆ ಸಮರ್ಪಿಸಿಕೊಂಡಿದ್ದ ಸತೀಶ ಕಟ್ಟಿಗೆ ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು ಎಂದು ಆರ್.ಎಸ್.ಎಸ್ ಪರ್ಯಾವರಣ ಪ್ರಮುಖ ಜಯರಾಮ ಬೊಳ್ಳಾಜೆ ಹೇಳಿದರು.

ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ಮಂದಿರದ ಸುದರ್ಶನ ಸಭಾಭವನದಲ್ಲಿ ಆರ್.ಎಸ್.ಸ್ವಯಂ ಸೇವಕ ದಿ.ಸತೀಶ ಕಟ್ಟಿಗೆ ಅವರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು. ಸಂಘದ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಇತರರನ್ನು ಜೋಡಿಸುವ ಶಕ್ತಿ,ಯುಕ್ತಿ ಅವರಲ್ಲಿತ್ತು. ಹಾವೇರಿಯಲ್ಲಿ ಸಂಘದ ಪ್ರಚಾರಕರಾಗಿ ಅವರು ಮಾಡಿದ ಸೇವಾ ಚಟುವಟಿಕೆ ನೆನಪಿಡುವಂತದ್ದು. ಸತೀಶ ಕಟ್ಟಿಗೆಯವರಲ್ಲಿದ್ದ ಧೈರ್ಯ, ಸೇವಾ ಮನೋಭಾವನೆ, ಅಚಲತೆ ನಮ್ಮೆಲ್ಲರಲ್ಲಿ ಬರಲಿ ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಾ.ಕ.ರಾ.ರ.ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಶಂಭುಲಿಂಗ ಹೆಗಡೆ, ಗೋವಿಂದ ಹೆಗಡೆ ಅಚವೆ, ಗಣಪತಿ ಹಿರೇಸರ, ವೆಂಕಟ್ರಮಣ ಬೆಳ್ಳಿ ಹಾಗೂ ಇತರರು ನುಡಿನಮನ ಸಲ್ಲಿಸಿದರು.