ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯಕ್ರಮ

ಯಲ್ಲಾಪುರ: ರಾಷ್ಟ್ರೀಯ ಸಿದ್ದರಾಮೇಶ್ವರ ಓಡ್ ಯುವ ವೇದಿಕೆಯ ವತಿಯಿಂದ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಅಂಗವಾಗಿ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೋವಿ ವಡ್ಡರ್, ಜಿಲ್ಲಾ ಕಾರ್ಯದರ್ಶಿ ಪರಶುರಾಮ ಬೊವಿ ವಡ್ಡರ್, ಜಿಲ್ಲಾಸಂಚಾಲಕ ಶಿವರಾಜ, ಪ್ರಮುಖರಾದ ಸಂದೀಪ ವಡ್ಡರ್, ಮಂಜುನಾಥ ಎಂ ಮುಂತಾದವರು ಭಾಗವಹಿಸಿದ್ದರು.