ಕಣ್ಣೆದುರೇ ಅಪಘಾತವಾದರೂ ಹೊಯ್ಸಳ ನಿಲ್ಲಿಸದೆ ಹೋದ ಪೊಲೀಸ್ರು, ಒದ್ದಾಡಿ ಪ್ರಾಣ ಬಿಟ್ಟ ಆಟೋ ಚಾಲಕ

ಬೆಂಗಳೂರು: ಮಹಾನಗರದ ಕುರುಬರಹಳ್ಳಿಯಲ್ಲಿ ನಿನ್ನೆ(ಜು.5) ರಾತ್ರಿ ಆಟೋವೊಂದು ನಿಯಂತ್ರಣ ತಪ್ಪಿ ನಿಂತಿದ್ದ ಒಮ್ನಿ  ಹೊಡೆದಿತ್ತು. ಆಟೋ ಗುದ್ದಿದ್ದ ರಭಸಕ್ಕೆ ಆಟೋ ಚಾಲಕ ರಂಗನಾಥ(40) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಕುರಿತು ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು, ಪೊಲೀಸ್​ ವಾಹನದ ಮುಂದೆಯೇ ಆ್ಯಕ್ಸಿಡೆಂಟ್​ ಆದರೂ ಪೊಲೀಸರು ನಿಲ್ಲಿಸದೆ ನೋಡಿಕೊಂಡು ಹೋಗಿದ್ದು ಬೆಳಕಿಗೆ ಬಂದಿದೆ.

ಇನ್ನು ಅಪಘಾತವಾಗಿ ಸಹಾಯ ಸಿಗದೆ ಆಟೋ ಚಾಲಕ ರಂಗನಾಥ್ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಕಣ್ಣೆದುರೇ ಅಪಘಾತವಾದರೂ ಗಾಡಿ ನಿಲ್ಲಿಸದ ಪೊಲೀಸರು, ಕಂಡು ಕಾಣದಂತೆ ಹೊರಟರಾ ಎಂಬ ಪ್ರಶ್ನೆ ಮೂಡಿದೆ. ಇದೀಗ ಮಹಾಲಕ್ಷ್ಮಿ ಲೇಔಟ್ ಹೊಯ್ಸಳ ಬೀಟ್ ಪೊಲೀಸರ ನಿರ್ಲಕ್ಷ್ಯಕ್ಕೆ ಆಟೋ ಚಾಲಕ ಕೊನೆಯುಸಿರೆಳೆದಿದ್ದಾನೆ.