ಸರಕಾರದಿಂದ 2023-24ನೇ ಸಾಲಿನ ಹೊಸ ಪಠ್ಯಗಳ ಪಟ್ಟಿ ಬಿಡುಗಡೆ

ಬೆಂಗಳೂರು (ಜು.1): 2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ ಆಗಿದೆ. ಹಳೇ ಪಠ್ಯಗಳನ್ನ ಕೈಬಿಟ್ಟು ಹೊಸ ಪಠ್ಯ ಸೇರ್ಪಡೆ ಮಾಡಲಾಗಿದೆ. ಕೈಬಿಟ್ಟಿರೋ ಪಠ್ಯಗಳು, ಹೊಸ ಪಠ್ಯಗಳ ಬಗ್ಗೆ ಸರಕಾರ ಪಟ್ಟಿ ಬಿಡುಗಡೆ ಮಾಡಿದೆ. 

ಯಾವ್ಯಾವ ಪಠ್ಯ ಕೈಬಿಡಲಾಗಿದೆ?:
ಪ್ರಥಮ ಭಾಷೆ ಕನ್ನಡ 6 ನೇ ತರಗತಿಯಲ್ಲಿ ನಿರ್ಮಲಾ ಸೂರತ್ಕಲ್ ಬರೆದ  ‘ನಮ್ಮದೇನಿದೆ’ ಪದ್ಯಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇದರ ಬದಲಾಗಿ ‘ನೀವೋದ ಮರುದಿನ’-ಚನ್ನಣ್ಣ ವಾಲೇಕರ್ ಎಂಬ ಪದ್ಯವನ್ನು  ಸೇರ್ಪಡೆ ಮಾಡಲಾಗಿದೆ.

7 ನೇ ತರಗತಿಯಲ್ಲಿ 
1) ಪೂರಕ ಗದ್ಯ-ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ- ರಮಾನಂದಚಾರ್ಯ  ಅವರ ಗದ್ಯವನ್ನು ಪರಿಗಣಿಸಬಾರದು ಎಂದು ಸೂಚಿಸಲಾಗಿದೆ. ಅದರ ಬದಲಾಗಿ ಸಾವಿತ್ರ ಭಾಯಿಪುಲೆ-ಡಾ.ಹೆಚ್.ಎಸ್.ಅನುಪಮ ಅವರ ಗದ್ಯ ಸೇರ್ಪಡೆ ಮಾಡಲಾಗಿದೆ.

ಇನ್ನು 8 ನೇ ತರಗತಿಯಲ್ಲಿ
1) ಗದ್ಯ-ಭೂ ಕೈಲಾಸ-ಪಾರಂಪಲ್ಲಿ ನರಸಿಂಹ ಐತಾಳ ಇದನ್ನು ಪರಿಗಣಿಸಬಾರದು ಎಂದು ತಿಳಿಸಲಾಗಿದೆ. ಇದರ ಬದಲಾಗಿ ಮಗಳಿಗೊಂದು ಪತ್ರ-ಜವಹಾರ್ ಲಾಲ್ ನೆಹರೂ ಅವರ ಗದ್ಯ ಸೇರಿಸಲಾಗಿದೆ.

8ನೇ ತರಗತಿ:
ಸಾಲವನ್ನು ಗೆದ್ದವರು-ಜೆ.ಟಿ.ಗಟ್ಟಿ  ಅವರ ಪಾಠವನ್ನು ಪರಿಗಣಿಸಬಾರದು.  ಬದಲಾಗಿ ಬ್ಲಡ್ ಗ್ರೂಪ್ – ವಿಜಯಮಾಲಾ ರಂಗನಾಥ್ ಅವರ ಪಾಠವನ್ನು ಸೇರ್ಪಡೆ ಮಾಡಲಾಗಿದೆ.

10 ನೇ ತರಗತಿ
1) ನಿಜವಾದ ಆದರ್ಶ ಪುರುಷ ಯಾರಾಗಬೇಕು-ಕೇಶವ ಹೆಡ್ಗೆವಾರ್  ಅವರ ಗದ್ಯವನ್ನು ಪರಿಗಣಿಸಬಾರದು. ಬದಲಾಗಿ ಸುಕುಮಾರಸ್ವಾಮಿಯ ಕಥೆ (ಶಿವಕೋಟಾಚಾರ್ಯ)ಯನ್ನು ಸೇರ್ಪಡೆಗೊಳಿಸಲಾಗಿದೆ.

10ನೇ ತರಗತಿ
ಶ್ರೇಷ್ಠ ಭಾರತೀಯ ಚಿಂತನೆಗಳು-ಶತಾವಧಾನಿ ಡಾ.ಆರ್.ಗಣೇಶ್ ಇದನ್ನು ಪರಿಗಣಿಸಬಾರದು, ಬದಲಾಗಿ ಸಾರಾ ಅಬೂಬಕ್ಕರ್ ಅವರ ಯುದ್ಧ ಎನ್ನುವ ಪಾಠವನ್ನು ಸೇರ್ಪಡೆ ಮಾಡಲಾಗಿದೆ. 

10 ನೇ ತರಗತಿ
ತಾಯಿ ಭಾರತೀಯ ಅಮರಪುತ್ರರು-ಚಕ್ರವರ್ತಿ ಸೂಲಿಬೆಲೆ ಅವರ ಸಂಪೂರ್ಣ ಪಾಠ ಕೈಬಿಡಲಾಗಿದೆ. 

10 ನೇ ತರಗತಿ
ವೀರಲವ (ಲಕ್ಷ್ಮೀಶ)  ಪದ ತಿದ್ದುಪಡಿ ಮಾಡಲಾಗಿದೆ.

9ನೇ ತರಗತಿಯಲ್ಲಿ 
ಅಚ್ಚರಿಯ ಜೀವಿ ಇಂಬಳ-ಸತ್ಯನಾರಾಯಣ ಭಟ್ ಅವರ ಪಾಠವನ್ನು ಕೈ ಬಿಡಲಾಗಿದೆ. ಅದರ ಬದಲಾಗಿ ಉರುಸ್ ಗಳಲ್ಲಿ ಭಾವೈಕ್ಯತೆ-ದಸ್ತಗಿರ್ ಅಲಿಬೈ  ಎಂಬ ಗದ್ಯ ಸೇರ್ಪಡೆ ಮಾಡಲಾಗಿದೆ.