ಮಾಟ ಮಂತ್ರ ಮಾಡುವ ದಂಪತಿಯನ್ನು ಮರಕ್ಕೆ ನೇತಾಡಿಸಿ ಬೆತ್ತದಲ್ಲಿ ಹೊಡೆದ ಗ್ರಾಮಸ್ಥರು

ಹೈದರಾಬಾದ್:ಮಾಟ ಮಂತ್ರ  ಮಾಡುತ್ತಿದ್ದಾರೆ ಎಂದು ಶಂಕಿಸಿ ಗ್ರಾಮಸ್ಥರು ದಂಪತಿಗಳಿಗೆ ಥಳಿಸಿ, ಮರಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ದಂಪತಿಯನ್ನು ಮರಕ್ಕೆ ನೇತುಹಾಕಿ ಗ್ರಾಮಸ್ಥರು ಬೆತ್ತದಿಂದ ಹೊಡೆದಿದ್ದಾರೆ. ದಂಪತಿಯನ್ನು ಶ್ಯಾಮಮ್ಮ ಮತ್ತು ಯಾದಯ್ಯ ಎಂದು ಗುರುತಿಸಲಾಗಿದೆ. ಇವರನ್ನು ಜಿಲ್ಲೆಯ ಕೋಲ್ಕೂರು ಗ್ರಾಮದವರು ಎಂದು ಹೇಳಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ.

ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.