‘ಆದಿಪುರುಷ್’ ಸಿನಿಮಾ ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

ಬಾಹುಬಲಿ ಪ್ರಭಾಸ್ ಸದ್ಯ ಬಹುನಿರೀಕ್ಷಿತ ‘ಆದಿಪುರುಷ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ತೆರೆಗೆ ಬರುವ ಮುನ್ನ ಪ್ರಭಾಸ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ನಟ ಪ್ರಭಾಸ್, ಕೃತಿ ಸನೋನ್ ನಟನೆಯ ‘ಆದಿಪುರುಷ್’ ಇದೇ ಜೂನ್ 16ಕ್ಕೆ ಬೆಳ್ಳಿಪರದೆಯಲ್ಲಿ ಅಬ್ಬರಿಸಲು ಸಿದ್ಧವಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟ್ರೈಲರ್‌ನಿಂದ ಹವಾ ಕ್ರಿಯೇಟ್ ಮಾಡಿದೆ. ಚಿತ್ರದ ಹಾಡುಗಳು ಕೂಡ ಗಮನ ಸೆಳೆದಿದೆ. ಸಾಕಷ್ಟು ಟೀಕೆಗಳ ನಡುವೆ ಚಿತ್ರ ತೆರೆಗೆ ಸಜ್ಜಾಗಿದೆ.ಪ್ರಭಾಸ್ ಅವರು ‘ಬಾಹುಬಲಿ 2’ ಸಿನಿಮಾ ನಂತರ ನಟಿಸಿದ ಯಾವ ಚಿತ್ರ ಕೂಡ ಸಕ್ಸಸ್ ಕಾಣಲಿಲ್ಲ. ಸಾಲು ಸಾಲು ಸಿನಿಮಾ ಸೋಲುಗಳನ್ನ ಕಂಡಿರುವ ನಟನಿಗೆ ಈಗ ಗೆಲುವಿನ ಅವಶ್ಯಕತೆಯಿದೆ. ಆದಿಪುರುಷ್ ಯಶಸ್ಸಿನ ಮೇಲೆ ಇಡೀ ಚಿತ್ರತಂಡ – ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ‘ಆದಿಪುರುಷ್’ ಚಿತ್ರದ ಪ್ರೀ- ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ತಿರುಪತಿಯಲ್ಲಿ ಕಾರ್ಯಕ್ರಮ ಜರುಗಲು ವೇದಿಕೆ ಸಜ್ಜಾಗುತ್ತಿದೆ. ಜೂನ್ 6ರ ಸಂಜೆ ಪ್ರೀ ರಿಲೀಸ್ ಪ್ರೋಗ್ರಾಂ ನಡೆಯಲಿದೆ. ಈ ಮುನ್ನವೇ ನಟ ತಿರುಪತಿ ತಿಮ್ಮಪ್ಪನ ಸನ್ನಿಧಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.